top of page

ವಿನಾಯಕ ಕೃಷ್ಣ ಗೋಕಾಕ್

Email:
NA
Mobile:
NA

Profession

ಪ್ರಾಧ್ಯಾಪ್ರಕರು, ಸಾಹಿತಿಗಳು, ವಿಮರ್ಶಕರು, ಶಿಕ್ಷಣ ತಜ್ಞರು

Main Works

ಕಾದಂಬರಿಗಳು: ಸಮರಸವೇ ಜೀವನ, ಇಜ್ಜೋಡು, ಏರಿಳಿತ, ಸಮುದ್ರಯಾನ, ನಿರ್ವಹಣ ನರಹರಿ.


  1. ಕವನ ಸಂಕಲನಗಳು: ಕಲೋಪಾಸಕ, ಪಯಣ, ಸಮುದ್ರಗೀತೆಗಳು, ನವ್ಯ ಕವಿಗಳು, ತ್ರಿಶಂಕುವಿನ   ಪ್ರಜ್ಞಾ ಪ್ರಭಾತ, ಊರ್ಣನಾಭ, ಉಗಮ, ಬಾಳದೇಗುಲದಲ್ಲಿ, ಸಿಮ್ಲಾಸಿಂಫನಿ, ಇಂದಲ್ಲ ನಾಳೆ(ಚಂಪೂ),   ದ್ಯಾವಾಪೃಥಿವೀ, ಪಾರಿಜಾತದಡಿಯಲ್ಲಿ, ಅಭ್ಯುದಯ, ಭಾಗವತ ನಿಮಿಷಗಳು, ಭಾರತ ಸಿಂಧೂ ರಶ್ಮಿ


ಸಾಹಿತ್ಯ ವಿಮರ್ಶೆ: ಕವಿಕಾವ್ಯ ಮಹೋನ್ನತಿ, ನವ್ಯ ಮತ್ತು ಕಾವ್ಯ ಜೀವನ, ಇಂದಿನ ಕನ್ನಡ   ಕಾವ್ಯದ ಗೊತ್ತುಗುರಿಗಳು, ಸಾಹಿತ್ಯದಲ್ಲಿ ಪ್ರಗತಿ, ಸಾಹಿತ್ಯ ವಿಮರ್ಶೆಯ ಕೆಲವು ಮೂಲ  ತತ್ವಗಳು.


ಪ್ರವಾಸ ಕಥನ: ಸಮುದ್ರದಾಚೆದಿಂದ, ಪಯಣಿಗ, ಸಂತೋಷ

Recognition and Accoldaes

  1. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ  ಪದವಿ ಈ ಎರಡೂ ಗೌರವಗಳನ್ನು ಪಡೆದ ಪ್ರಥಮ ಕನ್ನಡಿಗರು. 

    1. ಬಳ್ಳಾರಿಯಲ್ಲಿ 1958ರಲ್ಲಿ ನಡೆದ 40ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. 

  2. ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. 

  3. ಕೇಂದ್ರ ಸರ್ಕಾರ 1961ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿದೆ. 

  4. ಹಂಪಿ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ಪದವಿ, 

  5. "ಭಾರತ ಸಿಂಧು ರಶ್ಮಿ"ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 

  6. ಭಾರತೀಯ ವಿದ್ಯಾಭವನದ ರಾಜಾಜಿ  ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿ, 

  7. "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿವೆ

    1. ಕನ್ನಡ ಸಾಹಿತ್ಯ ಲೋಕಕ್ಕೆ ಗೋಕಾಕರು ನೀಡಿದ ಅನುಪಮ ಕೊಡುಗೆಗಾಗಿ 1991ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ಇದು ಕನ್ನಡಕ್ಕೆ ಸಂದ 5ನೇ ಜ್ಞಾನಪೀಠ! (ಸಾಮಾನ್ಯವಾಗಿ   ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಯಲ್ಲಿ ನೀಡಲಾಗುತ್ತದೆ. ಆದರೆ ಗೋಕಾಕರಿಗೆ   ಪ್ರಶಸ್ತಿಯನ್ನು ನೀಡಲು ಸ್ವತಃ ಈ ದೇಶದ ಪ್ರಧಾನಿ  ಮಂತ್ರಿಗಳೇ ಮುಂಬಯಿಗೆ ಆಗಮಿಸಿದರು. ಇದು ಗೋಕಾಕರು ಎಷ್ಟು ಮಹತ್ವದ ವ್ಯಕ್ತಿ   ಎಂಬುದಕ್ಕೆ ಒಂದು ನಿದರ್ಶನ)

Other important aspetcs

ಕರ್ನಾಟಕ  ಸರ್ಕಾರ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ  ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ  ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ   ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ "ಗೋಕಾಕ್ ಚಳವಳಿ" ಎಂದೇ   ದಾಖಲಾಗಿದೆ.

Famous Songs

Note: Content mentioned here is subject and limited to availability and our reach. This is not an exhaustive biographical representation of the artiste mentioned here.
ವಿನಾಯಕ ಕೃಷ್ಣ ಗೋಕಾಕ್

Gokak V K

Poet
9 August 1909
To
28 April 1992
Pen Name:
Period:
bottom of page